ಆರ್ಥಿಕ ಸಂಕಷ್ಟದಲ್ಲಿರುವ ಕ್ರಿಕೆಟ್ ರಾಷ್ಟ್ರಗಳಿಗೆ ಬಿಸಿಸಿಐ ಆಫರ್

ಮಂಗಳವಾರ, 28 ಏಪ್ರಿಲ್ 2020 (09:16 IST)
ಮುಂಬೈ: ಕೊರೋನಾದಿಂದಾಗಿ ಯಾವುದೇ ಪಂದ್ಯಗಳಾಗದೇ ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಬಿಸಿಸಿಐ ಹಣಕಾಸಿನ ನೆರವಿಗೆ ಹೊಸ ಐಡಿಯಾ ಮಾಡಿದೆ.


ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಹೆಚ್ಚು ಪಂದ್ಯಗಳನ್ನು ಆಡಿ, ಹಣ ಸಂಪಾದಿಸಿ ಎಂದು ಆರ್ಥಿಕ ಹೊಡೆತಕ್ಕೊಳಗಾಗಿರುವ ಕ್ರಿಕೆಟ್ ರಾಷ್ಟ್ರಗಳಿಗೆ ಬಿಸಿಸಿಐ ಆಫರ್ ನೀಡಿದೆ ಎನ್ನಲಾಗಿದೆ.

ಇದಕ್ಕಾಗಿ ಮುಂಬರುವ ವೇಳಾಪಟ್ಟಿಯಲ್ಲಿ ಬದಲಾವಣೆ ತಂದು ಆದಷ್ಟು ಉಭಯ ದೇಶಗಳ ಸರಣಿ ಆಯೋಜಿಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕ್ರಿಕೆಟ್ ಟೂರ್ನಿ ನಡೆಸಿ ಹಣ ಸಂಗ್ರಹಣೆ ಮಾಡಿ ಆರ್ಥಿಕ ಸಂಕಷ್ಟ ದೂರ ಮಾಡುವ ಯೋಜನೆ ಬಿಸಿಸಿಐಯದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ