ವಿಶ್ವಕಪ್ ಗೆ ಆಯ್ಕೆಯಾಗದ ಬೇಸರ ಹೊರ ಹಾಕಿದ ಅಂಬಟಿ ರಾಯುಡು ಬಗ್ಗೆ ಬಿಸಿಸಿಐ ಹೇಳಿದ್ದು ಹೀಗೆ

ಗುರುವಾರ, 18 ಏಪ್ರಿಲ್ 2019 (06:52 IST)
ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಆ ಬೇಸರವನ್ನು ವ್ಯಂಗ್ಯ ಟ್ವೀಟ್ ಮಾಡುವ ಮೂಲಕ ಹೊರ ಹಾಕಿದ್ದರು.


ಈ ಬಗ್ಗೆ ಇದೀಗ ಬಿಸಿಸಿಐ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಕಪ್ ಗೆ ಆಯ್ಕೆಯಾಗದೇ ಇದ್ದ ಬೆನ್ನಲ್ಲೇ ರಾಯುಡು ‘ವಿಶ್ವಕಪ್ ಕ್ರಿಕೆಟ್ ನೋಡಲು 3 ಡಿ ಕನ್ನಡಕಕ್ಕೆ ಈಗಷ್ಟೇ ಆರ್ಡರ್ ಮಾಡಿರುವೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಗಳು ‘ರಾಯುಡು ಕಾಮೆಂಟ್ ನ್ನು ಗಮನಿಸಿದ್ದೇವೆ. ವಿಶ್ವಕಪ್ ಗೆ ಆಯ್ಕೆಯಾಗದೇ ಇರುವ ಬೇಸರ ಕೆಲವು ಆಟಗಾರರಲ್ಲಿ ಇರುವುದು ಸಹಜ. ಆದರೆ ಆ ಬೇಸರವನ್ನು ಹೊರ ಹಾಕುವಾಗ ಗಡಿ ದಾಡದಂತೆ ಎಚ್ಚರಿಕೆ ವಹಿಸುವುದು ಮುಖ್ಯ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ