ಸಮಿತಿಯು ಆಗಸ್ಟ್ 28ರಂದು ಭೇಟಿ ಮಾಡಿದಾಗ ಅನುಪಾಲನಾ ವರದಿಯನ್ನು ಚರ್ಚೆಗೆ ಎತ್ತಿಕೊಳ್ಳುವ ಸಂಭವವಿದೆ. ಅಕ್ಟೋಬರ್ 15ರೊಳಗೆ 11 ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಸಮಿತಿ ಬಯಸಿದೆ. ಬಿಸಿಸಿಐ ಈಗಾಗಲೇ ಸುಪ್ರೀಂಕೋರ್ಟ್ಗೆ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಸಿಜೆಐ ಟಿಎಸ್ ಠಾಕುರ್ ಅವರನ್ನು ಈ ಪ್ರಕರಣದಿಂದ ಅನರ್ಹಗೊಳಿಸಬೇಕೆಂದು ಮನವಿ ಮಾಡಿದೆ. ಈ ಕ್ಷಣದಲ್ಲಿ , ಪುನರ್ಪರಿಶೀಲನಾ ಅರ್ಜಿಯ ತೀರ್ಪು ಬರುವತನಕ ಯಾವುದೇ ರಾಜ್ಯ ಸಂಸ್ಥೆಗಳು ಸುಧಾರಣೆ ಕೈಗೊಳ್ಳುವುದಿಲ್ಲ.