ರಣಜಿ ಕ್ರಿಕೆಟ್ ಗೆ ಮೊದಲು ಮುಷ್ತಾಕ್ ಅಲಿ ಟೂರ್ನಿ ನಡೆಸಲಿರುವ ಬಿಸಿಸಿಐ

ಸೋಮವಾರ, 16 ನವೆಂಬರ್ 2020 (11:14 IST)
ಮುಂಬೈ: ಹಲವಾರು ತಿಂಗಳುಗಳ ನಂತರ ದೇಶದಲ್ಲಿ ಕ್ರಿಕೆಟ್ ಚಟುವಟಿಕೆಗಳು ಮತ್ತೆ ಗರಿಗೆದರುವ ಲಕ್ಷಣ ಕಾಣುತ್ತಿದೆ. ಎಲ್ಲಾ ಸರಿ ಹೋಗಿದ್ದರೆ ಇನ್ನೇನು ರಣಜಿ ಕ್ರಿಕೆಟ್ ಋತು ಆರಂಭವಾಗಬೇಕಿತ್ತು. ಆದರೆ ಈಗ ರಣಜಿಗೆ ಮೊದಲು ಬಿಸಿಸಿಐ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ನಡೆಸುವ ಚಿಂತನೆ ನಡೆಸುತ್ತಿದೆ.


ದೇಶೀಯ ಟಿ20 ಕ್ರಿಕೆಟ್ ಟೂರ್ನಿಯ ಮೂಲಕ ರಣಜಿಗೆ ವೇದಿಕೆ ಸಜ್ಜು ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಇದು ಮುಂದಿನ ಐಪಿಎಲ್ ಆವೃತ್ತಿಗೆ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳಿಗೆ ನೆರವಾಗಲಿದೆ. ಈಗಾಗಲೇ ಈ ಬಗ್ಗೆ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗಳಿಗೆ ಬಿಸಿಸಿಐ ಸಂದೇಶ ರವಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ