ಡಬ್ಲ್ಯುಟಿಸಿ ಫೈನಲ್ ಸೋಲಿನ ಹಿನ್ನಲೆ: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ?
ಇನ್ನೀಗ, ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದ್ದು, ಈ ಸರಣಿಗೆ ಬೌಲಿಂಗ್ ನಲ್ಲಿ ವಿಕೆಟ್ ಕೀಳದ, ಬ್ಯಾಟಿಂಗ್ ನಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕೊಹ್ಲಿ ಕೂಡಾ ಫೈನಲ್ ಸೋಲಿನ ಬಳಿಕ ಹೊಣೆಗಾರಿಕೆಯ ಜೊತೆಗೆ ರನ್ ಗಳಿಸುವ ಆಟಗಾರರನ್ನು ಆಯ್ಕೆ ಮಾಡಬೇಕಿದೆ ಎಂದಿದ್ದರು. ಹೀಗಾಗಿ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ ಮುಂತಾದ ಆಟಗಾರರ ಭವಿಷ್ಯಕ್ಕೆ ಸಂಚಕಾರ ಬರಬಹುದು.