ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನ ಕುರಿತಂತೆ ಬಿಸಿಸಿಐ ರಾಜ್ಯ ಘಟಕಗಳು ಒಟ್ಟಾಗಿ ಕಳವಳ ವ್ಯಕ್ತಪಡಿಸಿದ್ದು, ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಲೋಧಾ ಸಮಿತಿ ಜತೆ ವ್ಯವಹರಿಸಲು ಅಧಿಕಾರ ನೀಡಿದವು. ಲೋಧಾ ಸಮಿತಿ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುವುದು ಹೇಗೆಂದು ತಿಳಿಯದೇ ಬಿಸಿಸಿಐ ಕೂಡಾ ಗೊಂದಲದಲ್ಲಿ ಸಿಕ್ಕಿಬಿದ್ದಿದೆ.