ಪದ್ಮನಾಥನ್ ಅವರ ಜೊತೆ ಬ್ಯಾಟಿಂಗ್ ಮಾಡುತ್ತಿದ್ದ ಸಹಆಟಗಾರ ಪದ್ಮನಾಥನ್ ಎದೆಗೆ ಚೆಂಡು ತಾಗಿದ ಕೂಡಲೇ ಏನಾದರೂ ಸಮಸ್ಯೆಯಾಗಿದೆಯೇ ಎಂದು ಕೇಳಿದರು. ಅದಕ್ಕೆ ಪದ್ಮನಾಥನ್ ಏನೂ ಸಮಸ್ಯೆಯಿಲ್ಲ, ಚೆನ್ನಾಗಿದ್ದೇನೆ, ಐ ಆಮ್ ಆಲ್ರೈಟ್ ಎಂದು ಎದೆಯನ್ನು ಹಿಡಿದುಕೊಂಡು ಸಂಜ್ಞೆ ಮಾಡಿದ್ದರು. ಬಳಿಕ ವಿಕೆಟ್ ಹಿಂದೆ ಕೆಲವು ಹೆಜ್ಜೆ ಹಿಂದೆ ತೆರಳಿ ಕುಸಿದುಬಿದ್ದರು ಎಂದಿದ್ದಾರೆ.
ಸರ್ರೆ ಚೀಫ್ ಎಕ್ಸಿಕ್ಯೂಟಿವ್ ರಿಚರ್ಡ್ ಗೋಲ್ಡ್ ಭವಾಲನ್ ಸಾವಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ,ಸ್ನೇಹಿತರಿಗೆ ಮತ್ತು ಉಳಿದೆಲ್ಲರಿಗೂ ತಮ್ಮ ಸಹಾನೂಭೂತಿಯನ್ನು ಸೂಚಿಸಿದರು.