ಹೆಣ್ಣು ಮಕ್ಕಳ ಉಳಿಸಿ ಜಾಗೃತಿಗೆ ಕ್ರಿಕೆಟಿಗರು
ನವದೆಹಲಿ: ಹೆಣ್ಣು ಮಗುವನ್ನು ಉಳಿಸಿ ಜಾಗೃತಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಟೀಂ ಇಂಡಿಯಾದ ಪ್ರಮುಖ ಕ್ರಿಕೆಟಿಗರು ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಕೋಚ್ ಅನಿಲ್ ಕುಂಬ್ಳೆ ಜತೆಗೆ, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಸರ್ಕಾರಿ ಶಾಲೆಯೊಂದರ ಹೆಣ್ಣು ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ದೆಹಲಿಯಲ್ಲಿ ನಡೆದ ಏಕದಿನ ಪಂದ್ಯಕ್ಕೆ ಮೊದಲು ಈ ಕ್ರಿಕೆಟಿಗರು ಹೆಣ್ಣು ಮಕ್ಕಳೊಂದಿಗೆ ಭ್ರೂಣ ಹತ್ಯೆಯ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.