ಕ್ರೀಡಾ ಸ್ಪೂರ್ತಿ ಮೆರೆದು ಮೆಚ್ಚುಗೆಗೊಳಗಾದ ದೀಪಕ್ ಚಹರ್

ಸೋಮವಾರ, 22 ಆಗಸ್ಟ್ 2022 (18:37 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಎದುರಾಳಿ ಬ್ಯಾಟಿಗನಿಗೆ ಜೀವದಾನ ಕೊಟ್ಟು ದೀಪಕ್ ಚಹರ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತ ನೀಡಿದ 290 ರನ್ ಗಳ ಗುರಿ ಬೆನ್ನತ್ತಿರುವ ಜಿಂಬಾಬ್ವೆ ಸದ್ಯಕ್ಕೆ 20. ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದೆ. ಈ ನಡುವೆ ವೇಗಿ ದೀಪಕ್ ಚಹರ್ ಎದುರಾಳಿ ಬ್ಯಾಟಿಗ ಇನ್ನಸೆಂಟ್ ಕೈಯಾಗೆ ಜೀವದಾನ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದೀಪಕ್ ಬೌಲಿಂಗ್ ಮಾಡುತ್ತಿದ್ದಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಇನ್ನಸೆಂಟ್ ಕ್ರೀಸ್ ಮೊದಲೇ ಬಿಟ್ಟಿದ್ದರು. ಈ ಸಂದರ್ಭದಲ್ಲಿ ದೀಪಕ್ ಬೇಲ್ ಎಗರಿಸಿದರೂ ಎದುರಾಳಿ ವಿರುದ್ಧ ಅಪೀಲ್ ಮಾಡದೇ ಜೀವದಾನ ನೀಡಿದರು. ಮಂಕಡ್ ಔಟ್ ಮಾಡುವ ಅವಕಾಶವಿದ್ದರೂ ಕ್ರೀಡಾ ಸ್ಪೂರ್ತಿ ಮೆರೆದಿದ್ದಕ್ಕೆ ದೀಪಕ್ ಚಹರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ