ಭಾರತದ ಏಕದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಕ್ಕೆ ಕೆಲವು ವಲಯಗಳಿಂದ ಟೀಕೆ ಎದುರಿಸಿದ್ದಾರೆ. ಧೋನಿ ಶ್ರೀನಿವಾಸನ್ ಅವರನ್ನು ಉಪಾಹಾರದಲ್ಲಿ ಭೇಟಿ ನೀಡಿ ಸುಮಾರು 45 ನಿಮಿಷಗಳ ಕಾಲ ಅವರಜತೆ ಇದ್ದರು. ಅವರು ನಿರ್ಗಮಿಸಿದ ನಂತರ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಶ್ರೀನಿವಾಸನ್ ಅವರನ್ನು ಭೇಟಿಯಾಗಿದ್ದರು.
ಸಿಎಸ್ಕೆ ಮತ್ತು ರಾಜಸ್ಥಾನ ರಾಯಲ್ಸ್ ಎರಡೂ ತಂಡಗಳನ್ನು ಲೋಧಾ ಸಮಿತಿಯು ಐಪಿಎಲ್ನಿಂದ 2 ವರ್ಷಗಳ ಕಾಲ ನಿಷೇಧ ವಿಧಿಸಿದೆ. ಧೋನಿ ಸಿಎಸ್ಕೆಯ ನಾಯಕರಾಗಿ ಕಳೆದ 8 ಸೀಸನ್ನಿಂದ ಕಾರ್ಯನಿರ್ವಹಿಸಿದ್ದು, ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ ಧೋನಿ ಶ್ರೀನಿವಾಸನ್ ಅವರನ್ನು ಭೇಟಿಯಾಗುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಕೆಲವು ವಲಯಗಳಲ್ಲಿ ಹರಿದಾಡುತ್ತಿದೆ.