ತಂಡಕ್ಕೆ ಸಂಕಷ್ಟದ ಸನ್ನಿವೇಶಗಳಲ್ಲಿ ಆಪದ್ಬಾಂಧವ ಎಂದು ಪರಿಗಣಿಸಲಾದ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಕೂಡ ಇತರರಂತೆ ಒತ್ತಡದ ಭಾವನೆ ಅನುಭವಿಸುವುದಾಗಿ ಹೇಳಿದ್ದಾರೆ. ಆದರೆ ಅಪಾಯಕಾರಿ ಸನ್ನಿವೇಶಗಳಲ್ಲಿ ಪಾರಾಗುವ ಕ್ರಮವನ್ನು ನಿರ್ವಹಿಸುವುದು ಹೇಗೆಂದು ತಮಗೆ ಗೊತ್ತಿದೆ ಎಂದು ಹೇಳಿದರು.ನಿ ಅವರ ಅಜೇಯ 45 ರನ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪ್ರಯಾಸದ ಗೆಲುವು ಗಳಿಸಿತ್ತು.
ನಾನು ಸಂಕಷ್ಟದ ಸನ್ನಿವೇಶದಿಂದ ಪಾರಾಗುವುದು ಹೇಗೆಂದು ತಿಳಿದಿದ್ದೇನೆ. ಆದರೆ ಪ್ರತಿ ಬಾರಿ ನಾನು ಯಶಸ್ವಿಯಾಗುವುದಿಲ್ಲ. ಆದರೆ ಅದರಿಂದ ಪಾರಾಗುವ ವಿಧಾನ ಗೊತ್ತಿದ್ದರೆ ಅದು ಸುಲಭವಾಗುತ್ತದೆ ಎಂದು ನಾಯಕ ಧೋನಿ ಹೇಳಿದರು. ಧೋನಿ ಕಳೆದ ಒಂದು ದಶಕದಲ್ಲಿ ತಮ್ಮ ಆಟದಲ್ಲಿ ಸುಧಾರಣೆ ಮಾಡಿಕೊಂಡಿದ್ದು, ಸೀಮಿತ ಓವರುಗಳ ಪಂದ್ಯದಲ್ಲಿ ಉತ್ತಮ ಫಿನಿಷರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.