ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಭಾರತದ ಕಿರು ಓವರುಗಳ ಸರಣಿಯ ಜಿಂಬಾಬ್ವೆ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದೆ. ಅಜಿಂಕ್ಯಾ ರಹಾನೆ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಾರೆ. ಬಿಸಿಸಿಐ ಹರ್ಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ರಾಷ್ಟ್ರೀಯ ಆಯ್ಕೆದಾರರು ನವದೆಹಲಿಯಲ್ಲಿ ಸೋಮವಾರ ತಂಡವನ್ನು ಆಯ್ಕೆ ಮಾಡಿದರು.
ಭಾರತ ಜುಲೈ 10ರಿಂದ ಮೂರು ಏಕದಿನಗಳನ್ನು ಮತ್ತು ಎರಡು ಟಿ20 ಪಂದ್ಯಗಳನ್ನು ಆಡಲಿದೆ. ತಂಡದ ನಿರ್ದೇಶಕ ರವಿ ಶಾಸ್ತ್ರಿ ಈ ಬಾರಿ ಜೊತೆಯಲ್ಲಿ ತೆರಳುವುದಿಲ್ಲ. ಬದಲಿಗೆ ಬೆಂಬಲ ಸಿಬ್ಬಂದಿಯಾದ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆರ್. ಶ್ರೀಧರ್ ತಂಡವನ್ನು ಜತೆಗೂಡುತ್ತಾರೆ. 2016ರ ಐಸಿಸಿ ವಿಶ್ವ ಟಿ 20ಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ತಿಳಿಸಿದರು.
ಭಾರತ ಎ ತಂಡದ ಆಟಗಾರರನ್ನು ಕೂಡ ಆಯ್ಕೆದಾರರು ಹೆಸರಿಸಿದ್ದು, ಚೇತೇಶ್ವರ ಪೂಜಾರಾ ಅದರ ನಾಯಕತ್ವ ವಹಿಸುತ್ತಾರೆ. ತಂಡ: ರಹಾನೆ(ನಾಯಕ), ರಾಯುಡು, ಮನೋಜ್, ಕೇದಾರ್, ಉತ್ತಪ್ಪಾ, ಮನೀಶ್, ಹರ್ಭಜನ್, ಅಕ್ಸರ್ ಪಟೇಲ್, ಧವಲ್, ಬಿನ್ನಿ, ಭುವಿ, ಮೋಹಿತ್, ಸಂದೀಪ್.