ಮಹೇಂದ್ರ ಸಿಂಗ್ ಧೋನಿ ಅತ್ಯಂತ ಯಶಸ್ವಿ ಭಾರತ ತಂಡದ ನಾಯಕರಾಗಿದ್ದರೂ, 2011-12ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವಮಾನಕರ 0-4 ಸೋಲಿನ ಬಳಿಕ ಧೋನಿಗೆ ನಾಯಕತ್ವದಿಂದ ಕೊಕ್ ನೀಡಲು ನಿರ್ಧರಿಸಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಬಳಿಕ ಆಯ್ಕೆದಾರರು ಧೋನಿಗೆ ನಾಯಕತ್ವ ಪಟ್ಟವನ್ನು ತೆಗೆಯಲು ನಿರ್ಧರಿಸಿದ್ದರು. ಹೊಸ ಟೀಂ ಶೀಟ್ ಸಿದ್ದಪಡಿಸಿದ ಆಯ್ಕೆದಾರರು ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ನೀಡಿದ್ದರು.
ಭಾರತದ ಮಾಜಿ ಆಯ್ಕೆದಾರ ವೆಂಕಟ್ ಬೆಂಗಾಲಿ ನಿಯತಕಾಲಿಕೆಯಲ್ಲಿ ಈ ಕುರಿತು ತಿಳಿಸಿದ್ದು, ಇದು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಾಗಿದ್ದು, ಭಾರತ ಮೂರು ಪಂದ್ಯಗಳನ್ನು ಸೋತ ಬಳಿಕ ನಾಯಕತ್ವ ಬದಲಾವಣೆ ಅವಶ್ಯಕವೆಂದು ನಾವು ನಿರ್ಧರಿಸಿದ್ದಾಗಿ ಅವರು ತಿಳಿಸಿದರು.