ನವದೆಹಲಿ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಗೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲವಾದ ಹಿರಿಯ ಆರಂಭಿಕ ಗೌತಮ್ ಗಂಭೀರ್ ದೆಹಲಿ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಿದ ದೆಹಲಿ ತಂಡದಲ್ಲಿ ಗಂಭೀರ್ ಮತ್ತು ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ.
ಆದರೆ ಸದ್ಯಕ್ಕೆ ಟೀಂ ಇಂಡಿಯಾದಲ್ಲಿರುವ ಇಶಾಂತ್ ಶರ್ಮಾ ರಾಜ್ಯ ತಂಡಕ್ಕೆ ಲಭ್ಯರಾಗುವ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ನವಂಬರ್ 21 ರಿಂದ ಕೇರಳದ ವಯನಾಡಿನಲ್ಲಿ ರಣಜಿ ಪಂದ್ಯ ಆರಂಭವಾಗಲಿದೆ. ಇದೇ ವೇಳೆ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಿಖರ್ ಧವನ್ ಈ ಪಂದ್ಯದಲ್ಲಿ ಸಾಮರ್ಥ್ಯ ಪರೀಕ್ಷಿಸಲಿದ್ದಾರೆ.
“ಆಯ್ಕೆ ಸಮಿತಿ ಗಂಭೀರ್ ಜತೆ ಮಾತುಕತೆ ನಡೆಸಿದೆ. ಅವರು ರಾಜ್ಯ ತಂಡದಲ್ಲಿ ಆಡಲು ಉತ್ಸುಕರಾಗಿದ್ದಾರೆ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ” ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ