ಭಾರತದ ಬ್ಯಾಟ್ಸ್‌ಮನ್‌ಗಳು ಪಲಾಯನವಾದಿಗಳು : ಗವಾಸ್ಕರ್ ಟೀಕೆ

ಶನಿವಾರ, 31 ಜನವರಿ 2015 (16:23 IST)
ಭಾರತದ ಪ್ರಸಿದ್ಧ ಮಾಡಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಭಾರತದ ತಂಡದ ಬ್ಯಾಟ್ಸ್‌ಮನ್‌ಗಳನ್ನ ಟೀಕಿಸಿದ್ದು, ಪಲಾಯನವಾದಿಗಳು ಎಂದು ಬಣ್ಣಿಸಿದ್ದಾರೆ.ಇಂಗ್ಲೆಂಡ್ ವಿರುದ್ಧ ಭಾರತದ ಸೋಲನ್ನು ಉದಾಹರಿಸಿದ ಅವರು, ಬಹುಮಟ್ಟಿನ ಆಟಗಾರರು ಪಲಾಯನವಾದಿಗಳಾಗಿದ್ದು, ಇನ್ನೊಂದು ಕೊನೆಯಲ್ಲಿ ಉಳಿದಿರಲು ತೃಪ್ತಿಪಡುತ್ತಾರೆ ಅಥವಾ ಅಬ್ಬರದ ಬ್ಯಾಟಿಂಗ್‌ಗೆ ಯತ್ನಿಸಿ ಔಟಾಗುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಫಾರಂ ಕುಸಿದಿದ್ದು, ಮೇಲಿನ ಕ್ರಮಾಂಕದಲ್ಲಿ ಉತ್ತಮ ಆರಂಭ ನೀಡಲು ವಿಫಲರಾಗಿರುವುದರಿಂದ ತಂಡದ ಮುಖ್ಯ ಖಳನಾಯಕ ಎನಿಸಿದ್ದಾರೆ.

ಎಡಗೈ ಆಟಗಾರ 10 ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್ ಸ್ಕೋರ್ ಮಾಡಿದ್ದು, ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ವೆಬ್ದುನಿಯಾವನ್ನು ಓದಿ