ಹಾರ್ದಿಕ್ ಪಾಂಡ್ಯ ಯಶಸ್ಸಿಗೆ ಕಾರಣ ಯಾರು ಗೊತ್ತೇ?

ಶುಕ್ರವಾರ, 4 ನವೆಂಬರ್ 2016 (09:47 IST)
ಮುಂಬೈ: ಟೆಸ್ಟ್ ತಂಡಕ್ಕೆ ಆಯ್ಕೆಯಾದ ಬಳಿಕ ಹಾರ್ದಿಕ್ ಪಾಂಡ್ಯ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಅಲ್ಲದೆ ತಮ್ಮ ಯಶಸ್ಸಿಗೆ ಕಾರಣ ಯಾರು ಎಂಬುದನ್ನೂ ಹೇಳಿದ್ದಾರೆ.

ಅದಕ್ಕೆಲ್ಲಾ ಕಾರಣ ರಾಹುಲ್ ದ್ರಾವಿಡ್ ಅಂತೆ. ದ್ರಾವಿಡ್  ಭಾರತದ ಎ ತಂಡದ ಕೋಚ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅವರ ಮಾರ್ಗದರ್ಶನದಲ್ಲಿ ಎ ತಂಡದ ಸದಸ್ಯರಾಗಿ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು.  

“ದ್ರಾವಿಡ್ ನನ್ನನ್ನು ಮಾನಸಿಕವಾಗಿ ಗಟ್ಟಿಗೊಳಿಸಿದರು. ಕ್ರಿಕೆಟ್ ನಲ್ಲಿ ಮಾನಸಿಕ ದೃಢತೆ ಎನ್ನುವುದು ಅಗತ್ಯ ಎಂದು ನನಗೆ ಅರ್ಥವಾಯಿತು.  ಆಗಲೇ ನಾನೊಬ್ಬ ಕ್ರಿಕೆಟರ್ ಆಗಿ ರೂಪುಗೊಂಡಿದ್ದು. ಇದು ನನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು” ಎಂದು ದ್ರಾವಿಡ್ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ ಪಾಂಡ್ಯ.

ಸದ್ಯಕ್ಕೆ ಟೀಂ ಇಂಡಿಯಾದಲ್ಲಿರುವ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ ಎಲ್ಲರೂ  ದ್ರಾವಿಡ್ ರಿಂದ ಸ್ಪೂರ್ತಿ ಪಡೆದು, ಅವರ ಗರಡಿಯಲ್ಲಿ ಪಳಗಿದವರೇ. ಅಲ್ಲಿಗೆ ದ್ರಾವಿಡ್ ಒಬ್ಬ ಉತ್ತಮ ಗುರು ಎನ್ನುವುದು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ