ಮತ್ತೆ ನನ್ನ ದೇಶಕ್ಕೆ ಹೀಗೆ ಸೋಲಾಗದಂತೆ ನೋಡಿಕೊಳ್ಳುತ್ತೇನೆ: ಹರ್ಮನ್ ಪ್ರೀತ್ ಕೌರ್

ಶುಕ್ರವಾರ, 24 ಫೆಬ್ರವರಿ 2023 (08:40 IST)
Photo Courtesy: Twitter
ಕೇಪ್ ಟೌನ್: ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಭಾವುಕರಾಗಿದ್ದರು.

ಸೋಲಿನ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುವಾಗ ಹರ್ಮನ್ ಭಾವುಕರಾಗಿದ್ದರು. ಕನ್ನಡಕ ಹಾಕಿಕೊಂಡೇ ಮಾತನಾಡಲು ಬಂದಿದ್ದರು.

ಈ ಬಗ್ಗೆ ಪ್ರಶ್ನಿಸಿದಾಗ ನನ್ನ ದೇಶ ನನ್ನ ಕಣ್ಣೀರು ನೋಡಲು ನಾನು ಇಷ್ಟಪಡಲ್ಲ. ನನ್ನ ದೇಶಕ್ಕೆ ಮತ್ತೆ ಯಾವತ್ತೂ ಹೀಗೆ ಸೋಲಾಗಲು ಬಿಡಲ್ಲ’ ಎಂದಿದ್ದಾರೆ. ಅವರ ಈ ಮಾತುಗಳು ಅಭಿಮಾನಿಗಳನ್ನೂ ಭಾವುಕರಾಗಿಸಿದೆ. ಮತ್ತೆ ನಾವು ಸುಧಾರಿಸಿಕೊಂಡು ಇನ್ನೊಮ್ಮೆ ಒಳ್ಳೆಯ ಪ್ರದರ್ಶನ ನೀಡುತ್ತೇವೆ ಎಂದು ಹರ್ಮನ್ ಭರವಸೆ ನೀಡಿದ್ದಾರೆ. ಈ ಪಂದ್ಯವನ್ನು ಭಾರತ ಕೇವಲ 5 ರನ್ ಗಳಿಂದ ಸೋತಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ