ಕ್ರಿಕೆಟ್ ಆಟುವಾಗ ಎದೆಗೆ ಚೆಂಡು ಬಡಿದಿದ್ದರಿಂದ 6 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ನಗರದ ವನಸ್ಥಲಿಪುರಂನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು ಬ್ಯಾಟಿಂಗ್ ಮಾಡುತ್ತಿದ್ದ 12 ರ ಹರೆಯದ ಬಾಲಕ ಬಾರಿಸಿದ ಚೆಂಡು ನೇರವಾಗಿ ವಂಶಿಕೃಷ್ಣ ಎಂಬ ಬಾಲಕನ ಎದೆಗೆ ಬಡಿದೆ.
ಪಶ್ಚಿಮ ಬಂಗಾಳದ ಉದಯೋನ್ಮುಖ ಕ್ರಿಕೆಟರ್ ಅಂಕಿತ್ ಕೇಸರಿ ಸಾವು ಮನಸ್ಸಿನಿಂದ ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಸಹ ಆಟಗಾರ ಬಾರಿಸಿದ ಚೆಂಡು ರಭಸವಾಗಿ ಎದೆಗೆ ಬಡಿದು ತಕ್ಷಣ ನೆಲಕ್ಕುರುಳಿದ ವಂಶಿಕೃಷ್ಣನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಕೆಲವೇ ಗಂಟೆಗಳಲ್ಲಿ ಅಸುನೀಗಿದ್ದಾನೆ. ಬಾಲಕ ಮನ್ಸೂರಾಬಾದ್ನ ನಾಗಾರ್ಜುನ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಎಂದು ತಿಳಿದು ಬಂದಿದೆ.