ಧೋನಿ ಭಾಯಿ ನನಗೆ ಫೀಡ್ಬ್ಯಾಕ್ ನೀಡಿದ್ದು, ಅದನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಂಡು ಮುಂದುವರಿದಿದ್ದೇನೆ. ನನ್ನ ಗುರಿ ಏಕದಿನ ಪಂದ್ಯಗಳಲ್ಲಿ ಹೆಚ್ಚು ಸ್ಥಿರವಾಗಿ ಆಡುವುದಾಗಿದೆ ಎಂದು ಜಿಂಬಾಬ್ವೆಗೆ ನಿರ್ಗಮನ ಪೂರ್ವ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಆಟಗಾರರನ್ನು ಸೀನಿಯರ್ ಮತ್ತು ಜೂನಿಯರ್ ಎಂದು ವರ್ಗೀಕರಣದಲ್ಲಿ ತಮಗೆ ನಂಬಿಕೆಯಿಲ್ಲ ಎಂದು ರಹಾನೆ ಹೇಳಿದರು.
ಎಲ್ಲಾ 15 ಆಟಗಾರರು ಸಮಾನವಾಗಿ ಮುಖ್ಯರಾಗಿದ್ದು, ಅವರ ಸಾಮರ್ಥ್ಯಗಳ ಮೇಲೆ ನಂಬಿಕೆ ಇರಿಸಿರುತ್ತಾರೆ. ನನಗೆ ಎಲ್ಲಾ ಆಟಗಾರರ ಬೆಂಬಲವಿದೆ. ನಾಯಕನಾಗಿ ನನ್ನದೇ ಕೆಲವು ಐಡಿಯಾಗಳಿದ್ದು, ನನ್ನ ಸಹಜಪ್ರವೃತ್ತಿಯನ್ನು ಬೆಂಬಲಿಸುತ್ತೇನೆ ಎಂದು ರಹಾನೆ ಹೇಳಿದರು. ಏಕದಿನ ಪಂದ್ಯಗಳಿಗೆ ಕಮ್ ಬ್ಯಾಕ್ ಆಗಿರುವ ಹರ್ಭಜನ್ ಸಿಂಗ್ ಅವರನ್ನು ಹೊಗಳಿದ ರಹಾನೆ, ಅವರ ಸಲಹೆ ಪಡೆಯುವುದಾಗಿ ತಿಳಿಸಿದರು.