ಭಾರತದಲ್ಲಿ ಐಸಿಸಿ ವಿಶ್ವ ಟ್ವೆಂಟಿ 20 ಪಂದ್ಯದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಪಾಕಿಸ್ತಾನದ ಜತೆ ಕ್ರಿಕೆಟ್ ಬಾಂಧವ್ಯ ಆರಂಭಿಸುವ ಕುರಿತು ಮನದಟ್ಟು ಮಾಡಿದರು. ಖಾನ್ ಮೋದಿಯನ್ನು ಭೇಟಿ ಮಾಡಿ ಪಾಕ್ ಜತೆ ಕ್ರಿಕೆಟ್ ಸಂಬಂಧ ಮುಂದುವರಿಸುವ ವಿಷಯ ಕುರಿತು ಹೇಳಿದಾಗ, ಅದಕ್ಕೆ ಮೋದಿಯಿಂದ ಸಿಕ್ಕ ಉತ್ತರ ಮುಗುಳುನಗೆ.
ಈ ಬಿಕ್ಕಟ್ಟಿನ ಕುರಿತು ನಿರಾಶೆ ವ್ಯಕ್ತಪಡಿಸಿದ ಖಾನ್, ಎಲ್ಲಾ ಪಾಕಿಸ್ತಾನಿಯರನ್ನು ಈ ಘಟನೆಗೆ ಶಿಕ್ಷಿಸುವುದಕ್ಕೆ ಸಾಧ್ಯವಿಲ್ಲ ಎಂದರು. ಮಾಡಿರದ ತಪ್ಪಿಗಾಗಿ ಪಾಕಿಸ್ತಾನವನ್ನು ಶಿಕ್ಷಿಸುವುದು ತುಂಬಾ ಅಪಕ್ವ ನಿಲುವು. ಯಾವುದೇ ಮಾನವ ಹಕ್ಕುಗಳ ತತ್ವದಲ್ಲಿ ಸಾಮೂಹಿಕ ಶಿಕ್ಷೆಗೆ ಅನುಮತಿಯಿಲ್ಲ. ಪ್ರತಿಯೊಬ್ಬರೂ ಮುಂಬೈ ಮತ್ತು ಪಠಾಣ್ಕೋಟ್ ದಾಳಿಗಳನ್ನು ಖಂಡಿಸಿದ್ದಾರೆ.
ನಿಮಗಿಂತ ನಾವು ಹೆಚ್ಚು ಭಯೋತ್ಪಾದನೆ ದಾಳಿಗಳಿಂದ ನಲುಗಿದ್ದೇವೆ ಎನ್ನುವುದು ನೆನಪಿರಲಿ. ಭಯೋತ್ಪಾದನೆಯ ಕೆಟ್ಟ ಸ್ಥಿತಿಯಿಂದ ವಾಸ್ತವವಾಗಿ ನರಳುತ್ತಿರುವ ದೇಶವನ್ನು ನಿಂದಿಸಿ, ಸಾಮೂಹಿಕ ಶಿಕ್ಷೆ ನೀಡುವುದು ಅಪಕ್ವ ಧೋರಣೆ ಎಂದು ಇಮ್ರಾನ್ ಹೇಳಿದರು.