ಅಭಿನಂದಿಸಲು ಸಿರಾಜ್ನನ್ನೇ ಕೈಬಿಟ್ಟ ಜಯ್ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ
ಹಲವು ಮಂದಿ ಜಯ್ ಶಾ ಅವರ ಪೋಸ್ಟ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸಿರಾಜ್ ಮುಸ್ಲಿಂ ಎಂಬ ಕಾರಣಕ್ಕೆ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಅಭಿಮಾನಿಯೊಬ್ಬರು ಟೀಕಿಸಿದ್ದಾರೆ.
ಇದು ಎಜ್ಬಾಸ್ಟನ್ನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಗೆಲುವು. ಇದರೊಂದಿಗೆ ಪ್ರವಾಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಗಿಲ್ ನಾಯಕತ್ವ ವಹಿಸಿಕೊಂಡ ನಂತರ ಭಾರತಕ್ಕೆ ಇದು ಮೊದಲ ಗೆಲುವು. ಮೂರನೇ ಟೆಸ್ಟ್ ಜುಲೈ 10 ರಂದು ಲಾರ್ಡ್ಸ್ನಲ್ಲಿ ಆರಂಭವಾಗಲಿದೆ.