ಸುನಿಲ್ ಗವಾಸ್ಕರ್ ಬಳಿಕ ಅತ್ಯುತ್ತಮ ಭಾರತೀಯ ಓಪನರ್ ಎಂದು ಮಾಜಿ ಬ್ಯಾಟಿಂಗ್ ಜತೆಗಾರ ವೀರೇಂದ್ರ ಸೆಹ್ವಾಗ್ ಅವರ ಪ್ರಶಂಸೆಗೆ ಪಾತ್ರರಾಗಿದ್ದ ಗೌತಮ್ ಫಾರಂ ಕಳೆದುಕೊಂಡ ಬಳಿಕ ಆಯ್ಕೆದಾರರ ಅವಕೃಪೆಗೆ ಗುರಿಯಾಗಿ 20 ತಿಂಗಳು ಅಜ್ಞಾತವಾಸದಲ್ಲಿ ಕಳೆದರು. ಕಳೆದ ವರ್ಷ ಇಂಗ್ಲೆಂಡ್ನಲ್ಲಿ ಸಂಕ್ಷಿಪ್ತ ಕಮ್ಬ್ಯಾಕ್ ಆಗಿದ್ದರೂ ನಾಲ್ಕು ಇನ್ನಿಂಗ್ಸ್ನಲ್ಲಿ ಅತ್ಯಧಿಕ ಸ್ಕೋರಾದ 18 ರನ್ ಗಳಿಸಿದ್ದು ಗಂಭೀರ್ ಅವರನ್ನು ಮತ್ತೆ ಅಜ್ಞಾತವಾಸಕ್ಕೆ ದೂಡಿತು.
ಅನೇಕ ಮಂದಿ ಎಡಗೈ ಆಟಗಾರರು ಔಟಾಗುವ ವಿಧಾನ ಇದಾಗಿದ್ದು, ಬಲಗೈ ಆಟಗಾರರು ಎಡಗೈ ವೇಗಿಗಳ ಬೌಲಿಂಗ್ನಲ್ಲಿ ಇದೇ ಸ್ಥಿತಿ ಅನುಭವಿಸುತ್ತಾರೆ ಎಂದು ಹೇಳಿದ ಗಂಭೀರ್, ಆಸ್ಟ್ರೇಲಿಯಾದ ಮಾಜಿ ಓಪನರ್ ಜಸ್ಟಿನ್ ಲ್ಯಾಂಗರ್ ಅವರ ಹದ್ದಿನ ಕಣ್ಣಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.