ಕೊಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗೌರವ ಉಳಿಸಿಕೊಳ್ಳುವುದಕ್ಕಾಗಿ ಸಮಾಧಾನದ ಗೆಲುವು ಗಳಿಸಬೇಕಿದ್ದು, ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಈ ಪಂದ್ಯದಲ್ಲಿ ದಾಖಲೆಗಳ ಮೇಲೆ ಕಣ್ಣಿರಿಸಿದ್ದಾರೆ.
2-0ಯಿಂದ ಸರಣಿ ಸೋತಿರುವ ಭಾರತ 11 ಮಂದಿಯ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದು, ಕೊಹ್ಲಿ, ರೈನಾ ಮತ್ತು ಅಶ್ವಿನ್ ಅವರು ಆಡುವರೆಂದು ನಿರೀಕ್ಷಿಸಲಾಗಿದೆ. ಆತಿಥೇಯರು ಕಾನ್ಪುರದಲ್ಲಿ ಅಕ್ಟೋಬರ್ 11ರಿಂದ ನಡೆಯುವ ಏಕದಿನ ಪಂದ್ಯದಲ್ಲಿ ಸಮಾಧಾನಕರ ಗೆಲುವನ್ನು ಗಳಿಸಲು ಎದುರುನೋಡುತ್ತಿದ್ದಾರೆ.