ವಿಶ್ವಸನೀಯ ಮೂಲಗಳ ಪ್ರಕಾರ, ಶನಿವಾರ ನಡೆದ ಐಸಿಸಿ ಸಭೆಯಲ್ಲಿ ಕಮಲ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಲಾಗಿತ್ತು. ಅಂಪೈರಿಂಗ್ ಪಕ್ಷಪಾತದ ಬಗ್ಗೆ ಕಮಲ್ ತಮ್ಮ ಧ್ವನಿ ಎತ್ತಿದ್ದರಿಂದ ಶ್ರೀನಿವಾಸನ್ ತೀವ್ರ ಬೇಸರಗೊಂಡಿದ್ದರು. ರುಬೆಲ್ ಹುಸೇನ್ ಎಸೆತದಲ್ಲಿ ರೋಹಿತ್ ಶರ್ಮಾ ಅವರಿಗೆ ನಾಟೌಟ್ ನೀಡಿದ್ದರಿಂದ ಕಮಲ್ ಅಂಪೇರ್ ಪಕ್ಷಪಾತದಿಂದ ಔಟ್ ಕೊಡಲಿಲ್ಲ ಎಂದು ದೂರಿದ್ದರು.