IPL 2025 Final: RCB ಫ್ಯಾನ್ಸ್ ನಿಂದ ಸಿಎಂ ಸಿದ್ದರಾಮಯ್ಯಗೆ ವಿಶೇಷ ರಿಕ್ವೆಸ್ಟ್, ಏನದು ನೋಡಿ
ನಿನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ ಫೈನಲ್ ಗೇರಿದೆ. ಇದು ನಾಲ್ಕನೇ ಬಾರಿಗೆ ಮತ್ತು ಒಂಭತ್ತು ವರ್ಷಗಳ ಬಳಿಕ ಫೈನಲ್ ಗೇರಿದ ಖುಷಿ ಆರ್ ಸಿಬಿ ಅಭಿಮಾನಿಗಳಿಗಿದೆ.
ನಿನ್ನೆ ತಂಡ ಗೆದ್ದ ಬೆನ್ನಲ್ಲೇ ಆರ್ ಸಿಬಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದ್ದಾರೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯಗೆ ಮನವಿಯೊಂದನ್ನು ಮಾಡಿದ್ದಾರೆ. ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದ್ದು, ಆರ್ ಸಿಬಿ ಗೆದ್ದರೆ ಆ ದಿನವನ್ನು ಆರ್ ಸಿಬಿ ದಿನ ಎಂದು ಘೋಷಿಸಿ ಎಂದು ಮನವಿ ಮಾಡಿದ್ದಾರೆ.
ಗೋಕಾಕ್ ನ ಶಿವಾನಂದ ಎಂಬ ಆರ್ ಸಿಬಿ ಫ್ಯಾನ್ ವಿಶೇಷ ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದಾನೆ. ಆತನಿಗೆ ಇತರೆ ಆರ್ ಸಿಬಿ ಫ್ಯಾನ್ಸ್ ಕೂಡಾ ಬೆಂಬಲಿಸಿದ್ದಾರೆ. ಘೋಷಣೆ ಮಾಡುತ್ತಾರೋ ಬಿಡುತ್ತಾರೋ ಆರ್ ಸಿಬಿ ಫ್ಯಾನ್ಸ್ ಅಂತ ಹಬ್ಬ ಮಾಡಲು ರೆಡಿಯಾಗಿದ್ದಾರೆ.