ಕೋಲ್ಕತಾದಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಗುರುವಾರ ಒಂದೂವರೆ ಗಂಟೆ ಚರ್ಚೆಯ ಬಳಿಕ ಬಿಸಿಸಿಐ ಯಾವುದೇ ಪ್ರಗತಿ ಸಾಧಿಸಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ಗೆ ಮಧ್ಯಂತರ ಪರಿಹಾರಕ್ಕೆ ಚೆನ್ನೈ ಹೈಕೋರ್ಟ್ ನಿರಾಕರಿಸಿದ ಬಳಿಕ, ಬಿಸಿಸಿಐಗೆ ಬೇರೆ ದಾರಿಯಿಲ್ಲದೇ ಎರಡು ತಂಡಗಳ ಶೂನ್ಯತೆ ತುಂಬಲು ಹೊಸದಾಗಿ ಟೆಂಡರ್ ಕರೆಯುವುದು ಮಾತ್ರ ಬಾಕಿ ಉಳಿದಿದೆ.
ವಿಶ್ವಸನೀಯ ಮೂಲಗಳ ಪ್ರಕಾರ, ನಾಲ್ವರು ಸದಸ್ಯರ ಕಾರ್ಯಕಾರಿ ಗುಂಪು ಆಡಳಿತ ಮಂಡಳಿ ಸದಸ್ಯರಿಗೆ ಎರಡು ಸಲಹೆಗಳನ್ನು ನೀಡಿತು. ಮೊದಲ ಆಯ್ಕೆಯು ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಗೈರಿನಲ್ಲಿ 2 ವರ್ಷಗಳ ಅವಧಿಗೆ ಎರಡು ಹೊಸ ಐಪಿಎಲ್ ತಂಡಗಳಿಗೆ ಟೆಂಡರ್ ಕರೆಯುವುದು.
ಬಿಸಿಸಿಐ ಒಳಗಿನವರ ಪ್ರಕಾರ, ಮೊದಲ ಆಯ್ಕೆಯನ್ನು ಕಾರ್ಯಕಾರಿ ಸಮಿತಿ ತಳ್ಳಿಹಾಕುವ ಸಂಭವವಿದೆ. ಎರಡನೇ ಆಯ್ಕೆ ತಾರ್ಕಿಕವಾಗಿದ್ದು, ಮುಂದಿನ ಎರಡು ಸೀಸನ್ಗೆ ಹಣವನ್ನು ತಂದುಕೊಡುತ್ತದೆ ಮತ್ತು 2018ರಿಂದ ದೊಡ್ಡ ಐಪಿಎಲ್ಗೆ ಅವಕಾಶ ಕಲ್ಪಿಸುತ್ತದೆ.