ರಣಜಿ ಟ್ರೋಫಿ: ಕರ್ನಾಟಕ ಬೃಹತ್ ಮುನ್ನಡೆಯತ್ತ

ಶುಕ್ರವಾರ, 21 ಅಕ್ಟೋಬರ್ 2016 (13:42 IST)
ಕೋಲ್ಕತ್ತಾ:  ಈಡನ್ ಗಾರ್ಡನ್ ಮೈದಾನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಗ್ರೂಪ್ ಬಿ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡ ದೆಹಲಿ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ಕೇವಲ 90 ರನ್ನುಗಳಿಗೆ ಆಲೌಟ್ ಆಗಿತ್ತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಕರ್ನಾಟಕ ಎರಡನೇ ದಿನವಾದ ಇಂದು ಇತ್ತೀಚೆಗಿನ ವರದಿ ಪ್ರಕಾರ 7 ವಿಕೆಟ್ ನಷ್ಟಕ್ಕೆ 306 ರನ್ನು ಗಳಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ ನಲ್ಲಿ 216 ರನ್ನುಗಳ ಬೃಹತ್ ಮುನ್ನಡೆ ಪಡೆದಿದೆ. ಸಿ.ಎಂ. ಗೌತಮ್ ಮತ್ತು ಶ್ರೇಯಾಸ್ ಗೋಪಾಲ್ ಕ್ರೀಸ್ ನಲ್ಲಿದ್ದಾರೆ.

ಕರ್ನಾಟಕದ ಪರ ಆರ್. ಸಮರ್ಥ್ (53), ಮಯಾಂಕ್ ಅಗರ್ವಾಲ್ (56), ಕರುಣ್ ನಾಯರ್ (53), ಮತ್ತು ಎಂ.ಕೆ. ಅಬ್ಬಾಸ್ (52) ಅರ್ಧಶತಕ ದಾಖಲಿಸಿದ್ದಾರೆ. ದೆಹಲಿ ಪರ ವಿಕಾಸ್ ಟೋಕಸ್ ಮೂರು ಮತ್ತು ವರುಣ್ ಸೂದ್ 2 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ