ಶ್ರೀಶಾಂತ್ ವಿರುದ್ಧ ನಿಷೇಧವನ್ನು ತೆರವು ಮಾಡಬೇಕೆಂದು ಪತ್ರ ಬರೆದ ಬಳಿಕ ಬಿಸಿಸಿಐನಿಂದ ಪ್ರತಿಕ್ರಿಯೆಗೆ ಕೆಸಿಎಗೆ ಕಾಯುವುದಾಗಿ ಪ್ರಸಕ್ತ ಬೆಂಗಳೂರಿನಲ್ಲಿರುವ ಮ್ಯಾಥೀವ್ ಹೇಳಿದ್ದಾರೆ. ಕೆಸಿಎ ಪದಾಧಿಕಾರಿಗಳ ನಿಯೋಗವು ಬಿಸಿಸಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಕೆಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಕೋರ್ಟ್ ತೀರ್ಪಿನ ಬಳಿಕ , ಮೂವರು ಕ್ರಿಕೆಟಿಗರ ವಿರುದ್ಧ ನಿಷೇಧವನ್ನು ಸದ್ಯಕ್ಕೆ ತೆಗೆಯುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು.