ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅವರು ಒಂದು ರನ್ ಸ್ಕೋರ್ ಮಾಡುವುದನ್ನು ನೋಡಲು ಸಿಡ್ನಿಗೆ ಬಂದಿದ್ದಾರೆ. ನೀನು ಸಿಡ್ನಿಗೆ ಏಕೆ ಬಂದೆ, ಮೂರ್ಖಳೇ ಎಂದು ಟ್ವೀಟ್ ಮಾಡಲಾಗಿದೆ. ಸೆಮೀಸ್ಗೆ ಅನುಷ್ಕಾ ಸಿಡ್ನಿಗೆ ಬಂದಿದ್ದೇ ಅತೀ ಕೆಟ್ಟ ಪ್ರಮಾದವಾಗಿದೆ. ಇಡೀ ದೇಶ ಅನುಷ್ಕಾಳನ್ನು ಕ್ಷಮಿಸುವುದಿಲ್ಲ ಎಂದು ಕೊಹ್ಲಿ ಔಟಾದ ಕೂಡಲೇ ಟ್ವೀಟ್ ಮಾಡಲಾಗಿದೆ.
ಅನುಷ್ಕಾ ಕೂಡ ಬಾಲಿವುಡ್ ವೃತ್ತಿಜೀವನದಲ್ಲಿ ಕಠಿಣ ಹಂತವನ್ನು ಹಾದು ಬಂದಿದ್ದಾಳೆ. ಆದರೆ ಯಾರೂ ಕೊಹ್ಲಿಯನ್ನು ಅದಕ್ಕಾಗಿ ಬಯ್ಯಲಿಲ್ಲ. ಆಟವನ್ನು ಆಟವಾಗಿ ಕಾಣುವುದು ಭಾರತದ ಅಭಿಮಾನಿಗಳಿಗೆ ಮುಖ್ಯವಾಗಿದ್ದು, ಕುಟುಂಬ ಮತ್ತು ಆಟಗಾರರಿಗೆ ನಿಕಟ ಸಾಮೀಪ್ಯ ಹೊಂದಿರುವವರನ್ನು ಟೀಕಿಸುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.