ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಕಿರು ಓವರುಗಳ ನಾಯಕರಾಗಿ ಮಾತ್ರವಲ್ಲ, ಆಟಗಾರನಾಗಿಯೂ ಪರಿಶೀಲಿಸಬೇಕೆಂದು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಆಯ್ಕೆದಾರರಿಗೆ ಕರೆ ನೀಡಿದ್ದಾರೆ. ಧೋನಿಗೆ ಹೋಲಿಕೆಯಾಗಿ ಟೆಸ್ಟ್ ನಾಯಕರಾಗಿ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಗಮನಿಸುವಂತೆಯೂ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಕಿರು ಓವರುಗಳಲ್ಲಿ ಧೋನಿಯ ಪಾತ್ರವನ್ನು ಪರಿಶೀಲಿಸುವಂತೆಯೂ ಕರೆ ನೀಡಿದರು.
ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯನ್ನು 0-2ರಿಂದ ಸೋತಿದ್ದು, ಮೂರನೇ ಪಂದ್ಯ ಮಳೆಯಿಂದ ವಾಷ್ ಔಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಧೋನಿಯ ಪ್ರದರ್ಶನವನ್ನು ವಿಶ್ಲೇಷಿಸಿದ ಅವರು ಧೋನಿ ಭಾರತದ ಉತ್ತಮ ಆಟಗಾರನಾಗಿದ್ದರೂ, ತಂಡಕ್ಕೆ ಭಾರವಾಗಿ ಪರಿಣಮಿಸುವುದು ಬೇಕಾಗಿಲ್ಲ. ಅವರು ಈಗ ನೀಡುತ್ತಿರುವ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಅವರು ಹಲವು ವರ್ಷಗಳಿಂದ ಉತ್ತಮ ಸಾಧನೆ ತೋರಿದ್ದಾರೆಂದರೆ, ಈಗ ವಿಫಲವಾಗುವುದು ಸರಿಯೆನಿಸುವುದಿಲ್ಲ. ಧೋನಿ ನಾಯಕರಾಗಿ ಮಾತ್ರವಲ್ಲ ಆಟಗಾರರಾಗಿ ಹೇಗೆ ಆಡುತ್ತಿದ್ದಾರೆಂದು ಆಯ್ಕೆದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅಗರ್ಕರ್ ಹೇಳಿದರು.