ಭಾರತ ತಂಡಕ್ಕೆ ಸೇರ್ಪಡೆಯಾದ ಮನೀಷ್ ಪಾಂಡೆಗೆ ಸಂತಸ

ಶುಕ್ರವಾರ, 3 ಜುಲೈ 2015 (17:28 IST)
ಜಿಂಬಾಬ್ವೆ ವಿರುದ್ಧ ಸೀಮಿತ ಓವರುಗಳ ಸರಣಿಗೆ ಹಠಾತ್ ಕರೆ ಬಂದ ಬಳಿಕ, ಭಾರತದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಸರಣಿಯಲ್ಲಿ ಉತ್ತಮವಾಗಿ ಆಡುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
 
 ಅನೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರಿಂದ ಪಾಂಡೆ ಭಾರತದ 15 ಆಟಗಾರರ ತಂಡದಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಕೊಲ್ಕತಾ ನೈಟ್ ರೈಡರ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಟ್ವೆಂಟಿ 20 ಪಂದ್ಯಕ್ಕೆ ಸೇರಿಸಲಾಗಿತ್ತು. ಆದಾಗ್ಯೂ ಆ ಸರಣಿಯನ್ನು ಮಧ್ಯದಲ್ಲಿಯೇ ರದ್ದುಮಾಡಿದ್ದಿರಂದ ಭಾರತ ತಂಡದಲ್ಲಿ ಆಡಲು ಪಾಂಡೆ ಇನ್ನಷ್ಟು ಕಾಯಬೇಕಾಯಿತು. 
 
ಇಲ್ಲಿ ತಂಡಕ್ಕೆ ಸೇರ್ಪಡೆಯಾಗಲು ತೀವ್ರ ಸ್ಪರ್ಧೆಯಿದೆ. ನಮ್ಮ ಅವಕಾಶಗಳಿಗಾಗಿ ಕಾಯಬೇಕು. ನನಗೆ ನಿರೀಕ್ಷಿಸಿದ್ದಕ್ಕಿಂತ ತಡವಾಗಿ ಅವಕಾಶ ಸಿಕ್ಕಿದೆ. ಆದರೂ ಒಕೆ, ಭಾರತ ತಂಡದಲ್ಲಿ ಸುದೀರ್ಘ ಕಾಲ ಇರುವುದು ನನ್ನ ಗುರಿ ಎಂದು ಪಾಂಡೆ ಹೇಳಿದರು. ಎಲ್ಲಾ ಮೂರು ಮಾದರಿಯ ಆಟ ನನಗೆ ಮುಖ್ಯವಾಗಿದ್ದು ಎಲ್ಲಾ ಸ್ವರೂಪದ ಆಟಗಳಲ್ಲಿ ಸ್ಥಾನ ಪಡೆದರೆ ಸಂತೋಷವಾಗುತ್ತದೆ ಎಂದು ಪಾಂಡೆ ಹೇಳಿದರು. 

ವೆಬ್ದುನಿಯಾವನ್ನು ಓದಿ