ಮುಂಬೈ ಪಿಚ್ ಟೀಕಿಸಿದ ರವಿ ಶಾಸ್ತ್ರಿಗೆ ಮಂಜ್ರೇಕರ್ ತರಾಟೆ

ಮಂಗಳವಾರ, 27 ಅಕ್ಟೋಬರ್ 2015 (16:54 IST)
ವಾಂಖಡೆ ಪಿಚ್ ಕ್ಯುರೇಟರ್ ಸುಧೀರ್ ನಾಯಕ್ ಅವರ ವಿರುದ್ಧ ಟೀಂ ಇಂಡಿಯಾ ಡೈರೆಕ್ಟರ್ ನಡವಳಿಕೆ ಕುರಿತು ಕಾಮೆಂಟೇಟರ್ ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ. ನಾಯಕ್ ಮುಂಬೈ ಕ್ರಿಕೆಟ್ ಸಂಸ್ಥೆಗೆ ಈ ಕುರಿತು ಅಧಿಕೃತ ದೂರು ನೀಡಿದ್ದಾರೆ.
 
 ಈ ಕುರಿತು ಮಂಜ್ರೇಕರ್ ಸಾಮಾಜಿಕ ಜಾಲತಾಣದಲ್ಲಿ ಶಾಸ್ತ್ರಿ ಕುರಿತು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.  ಆಡುವ ದಿನಗಳಿಂದ ನಾಯಕ್ ಜತೆ ಸಂಬಂಧ ಹೊಂದಿದ್ದ ಮಂಜ್ರೇಕರ್ ನಾಯಕ್ ರಕ್ಷಣೆಗೆ ಬಂದಿದ್ದಾರೆ.
 
 ಸುಧೀರ್ ನಾಯಕ್ ಅವರನ್ನು ಟೀಕಿಸುವ ರವಿಶಾಸ್ತ್ರಿ ಸುಧೀರ್ ನಾಯಕ್ ಅವರ ವಯಸ್ಸಿಗೆ ಮತ್ತು ಮಾಜಿ ಸಹ ಟೆಸ್ಟ್ ಕ್ರಿಕೆಟರ್‌ಗೆ ಗೌರವ ಕೊಡಲಿಲ್ಲ ಎಂದು ಮಂಜ್ರೇಕರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ