ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸುತ್ತ ಸದಾ ವಿವಾದಗಳ ಹುತ್ತ ಆವರಿಸಿದ್ದು, ಮಂಡಳಿಯ ಅಧ್ಯಕ್ಷರಾಗಿದ್ದಾಗ ಇತರೆ ಬಿಸಿಸಿಐ ಸದಸ್ಯರ ಮೇಲೆ ಬೇಹುಗಾರಿಕೆ ನಡೆಸಲು ಮಂಡಳಿಯ 14 ಕೋಟಿ ರೂ. ಹಣವನ್ನು ಲಂಡನ್ ಮೂಲಕ ಖಾಸಗಿ ಸಂಸ್ಥೆಗೆ ಕೊಟ್ಟಿದ್ದರೆಂಬ ಸಂಗತಿ ವರದಿಯಾಗಿದೆ. ಬಿಸಿಸಿಐ ಹೊಸ ಅಧ್ಯಕ್ಷ ಜಗ್ಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ಮೊದಲ ಕಾರ್ಯಕಾರಿ ಸಮಿತಿ ಸಭೆಯನ್ನು ಭಾನುವಾರ ನಡೆಸಿತು. ಭಾರತದ ನೂತನ ಕೋಚ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಡಿಮೆ ಮೌಲ್ಯೀಕರಣವನ್ನು ಕುರಿತು ಸಭೆಯಲ್ಲಿ ಚರ್ಚಿಸಿತು.