ಭಾರತಕ್ಕೆ ವಿಶ್ವ ಕಪ್ ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಕ್ವಾರ್ಟರ್ ಫೈನಲ್ ಮುಟ್ಟುವುದು ಕಷ್ಟವಾಗದು. ಆದರೆ ಅದಾದನಂತರ, ಯಾವುದೇ ತಂಡ ಮೂರು ಉತ್ತಮ ಆಟಗಳು ಮತ್ತು ಸ್ವಲ್ಪ ಮಟ್ಟಿನ ಅದೃಷ್ಟದಿಂದ ಗೆಲವು ಸಾಧ್ಯವಾಗುತ್ತದೆ ಎಂದು ರಾಹುಲ್ ದ್ರಾವಿಡ್ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮಾತನಾಡುತ್ತಾ ಹೇಳಿದರು.
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈ ಬಾರಿ ಉತ್ತಮವಾಗಿ ಆಡುತ್ತವೆಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ ದ್ರಾವಿಡ್ ಬೌಲರ್ಗಳ ಬಗ್ಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದರು. ನಿಯಮಗಳ ಬದಲಾವಣೆಯಿಂದ, ಬೌಲರುಗಳಿಗೆ ಕಷ್ಟವಾಗಿದೆ. ನನಗೆ ಇದಕ್ಕೆ ಮುಂಚೆ ಬೌಲರ್ಗಳ ಬಗ್ಗೆ ಸಹಾನುಭೂತಿ ಇರಲಿಲ್ಲ. ಆದರೆ ಈಗ ಆ ಭಾವನೆ ಉಕ್ಕುತ್ತಿದೆ ಎಂದು ದ್ರಾವಿಡ್ ಹೇಳಿದರು.