ಕೊನೇ ಕ್ಷಣದಲ್ಲಿ ಕೇದಾರ್ ಜಾದವ್ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಗೆ ನಾಯಕ ಕೊಹ್ಲಿ ಛಾನ್ಸ್ ಕೊಟ್ಟಿದ್ದೇಕೆ?

ಶನಿವಾರ, 10 ಫೆಬ್ರವರಿ 2018 (16:15 IST)
ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
 

ಈ ಪಂದ್ಯದಲ್ಲಿ ಭಾರತ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಸ್ನಾಯು ಸೆಳೆತದಿಂದಾಗಿ ಕೇದಾರ್ ಜಾದವ್ ಆಡುತ್ತಿಲ್ಲ. ಅವರ ಸ್ಥಾನಕ್ಕೆ ಯುವ ಪ್ರತಿಭೆ ಶ್ರೇಯಸ್ ಐಯರ್ ಗೆ ಸ್ಥಾನ ನೀಡಲಾಗಿದೆ. ಅದರ ಹೊರತಾಗಿ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇದ್ದಾರೆ.

ಇನ್ನು ಎದುರಾಳಿ ತಂಡಕ್ಕೆ ಎಬಿಡಿ ವಿಲಿಯರ್ಸ್ ವಾಪಸಾತಿ ಆಗಿದೆ. ಇಮ್ರಾನ್ ತಾಹಿರ್ ಬದಲಿಗೆ ಮೋರ್ನೆ ಮೋರ್ಕೆಲ್ ಗೆ ಸ್ಥಾನ ನೀಡಲಾಗಿದೆ. ಸರಣಿಯಲ್ಲಿ 0-3 ರಿಂದ ಹಿನ್ನಡೆಯಲ್ಲಿರುವ ಆಫ್ರಿಕಾ ಸರಣಿ ಉಳಿಸಿಕೊಳ್ಳಲು ಇಂದು ಗೆಲ್ಲಲೇಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ