ರಣಜಿಯಲ್ಲಿ ತ್ರಿಶತಕ ಬಾರಿಸಿದ ಪ್ರಥಮ ಬ್ಯಾಟ್ಸ್‌ಮನ್ ರಾಹುಲ್

ಶುಕ್ರವಾರ, 30 ಜನವರಿ 2015 (19:28 IST)
ಕರ್ನಾಟಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಶುಕ್ರವಾರ ರಾಜ್ಯದಿಂದ ತ್ರಿಶತಕವನ್ನು ಬಾರಿಸಿದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರಪ್ರದೇಶದ ವಿರುದ್ಧ ರಣಜಿ ಪಂದ್ಯದ 2ನೇ ದಿನದಾಟದಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ.

ರಾಹುಲ್ ಅವರ ಭರ್ಜರಿ 336 ರನ್‌ಗಳಲ್ಲಿ 45 ಬೌಂಡರಿಗಳು ಮತ್ತು 3 ಸಿಕ್ಸರುಗಳಿದ್ದವು. ಒಂದು ಹಂತದಲ್ಲಿ ಕರ್ನಾಟಕವು 4 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ದುಸ್ಥಿತಿಯಲ್ಲಿತ್ತು.

ರಾಹುಲ್ ಅವರು ಶ್ರೇಯಾಸ್ ಗೋಪಾಲ್ ಜೊತೆಗೂಡಿ 181 ಜೊತೆಯಾಟವಾಡಿದರು. ಬಳಿಕ ಗೌತಮ್ ಜೊತೆ 52 ರನ್ ಕಲೆಹಾಕಿದರು.

ವೆಬ್ದುನಿಯಾವನ್ನು ಓದಿ