ರಣಜಿ ಕ್ರಿಕೆಟ್: ನಾಟಕೀಯ ಕುಸಿತ ಕಂಡ ಕರ್ನಾಟಕ
ಉತ್ತಮ ಆಟವಾಡುತ್ತಿದ್ದ ರವಿಕಾಂತ್ ಸಮರ್ಥ್ 86 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಗೋಪಾಲ್ 31 ರನ್ ಗಳಿಸಿದರೆ ನಾಯಕ ಕರುಣ್ ನಾಯರ್ ಶೂನ್ಯ ಸುತ್ತಿದ್ದು ದುಬಾರಿಯಾಯಿತು. ಇದೀಗ ವಿಕೆಟ್ ಕೀಪರ್ ಶರತ್ 13 ರನ್ ಮತ್ತು ವಿ ಕೌಶಿಕ್ 2 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮುಂಬೈ ಪರ ಶಶಾಂಕ್ ಅತರ್ಡೆ 4 ಮತ್ತು ಶಂಸ್ ಮುಲಾನಿ 3 ವಿಕೆಟ್ ಕಬಳಿಸಿದರು. ಕರ್ನಾಟಕ ಇನ್ನೂ 15 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದೆ.