ರಣಜಿ ಟ್ರೋಫಿ ಕ್ರಿಕೆಟ್: ಬಲಿಷ್ಠ ಗುಜರಾತ್ ಗೆ ಅಂಕುಶ ಹಾಕಿದ ಕರ್ನಾಟಕ

ಶುಕ್ರವಾರ, 14 ಡಿಸೆಂಬರ್ 2018 (17:18 IST)
ಸೂರತ್: ರಣಜಿ ಟ್ರೋಫಿ ಪಂದ್ಯದಲ್ಲಿ ಅತಿಥೇಯ ಗುಜರಾತ್ ನ್ನು ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ಕೇವಲ 216 ರನ್ ಗಳಿಗೆ ಕಟ್ಟಿ ಹಾಕಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ನಾಯಕ ಪ್ರಿಯಾಂಕ್ ಪಂಚಾಲ್ 74 ರನ್ ಗಳಿಸಿದರು. ಕರ್ನಾಟಕ ಪರ ವಿನಯ್ ಕುಮಾರ್, ಪ್ರತೀಕ್ ಜೈನ್, ರೋಹಿತ್ ಮೋರೆ, ಕೆ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಬಳಿಸಿದರು.

ದಿನದಂತ್ಯಕ್ಕೆ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 45  ರನ್ ಗಳಿಸಿದೆ. 7 ರನ್ ಗಳಿಸಿರುವ ರವಿಕಾಂತ್ ಸಮರ್ಥ್ ಕ್ರೀಸ್ ನಲ್ಲಿದ್ದಾರೆ. ಮೊದಲ ಇನಿಂಗ್ಸ್ ಮೊತ್ತ ದಾಟಲು ಕರ್ನಾಟಕ ಇನ್ನೂ171  ರನ್ ಗಳಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ