ರಣಜಿ ಟ್ರೋಫಿ ಕ್ರಿಕೆಟ್: ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಮುಂಬೈ

ಮಂಗಳವಾರ, 10 ಜನವರಿ 2017 (17:12 IST)
ಇಂಧೋರ್: ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ನಲ್ಲಿ ಪ್ರಬಲ ಮುಂಬೈ ತಂಡವನ್ನು ಮೊದಲ ದಿನವೇ ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಲು ಯಶಸ್ವಿಯಾಗಿದೆ. ಇದರೊಂದಿಗೆ ಆರು ದಶಕದ ನಂತರ ಫೈನಲ್ ಗೇರಿದ ಗುಜರಾತ್ ಈ ಪಂದ್ಯವನ್ನು ಸ್ಮರಣೀಯವಾಗಿಸಲು ಹೊರಟಿದೆ.

ಮುಂಬೈ ಮೊದಲ ಇನಿಂಗ್ಸ್ ನಲ್ಲಿ ಕೇವಲ 228 ರನ್ ಗಳಿಗೆ ಆಲೌಟ್ ಆಯಿತು. ಗುಜರಾತ್ ಪರ ಆರ್ ಪಿ ಸಿಂಗ್, ರುಜುಲ್ ಬಟ್, ಚಿಂತನ್ ಗಾಜಾ ತಲಾ ಎರಡು ವಿಕೆಟ್ ಕಿತ್ತರು.  ಮುಂಬೈ ಪರ  ಭರವಸೆಯ ಬ್ಯಾಟ್ಸ್ ಮನ್ ಪೃಥ್ವಿ ಶಾ 71 ರನ್ ಹಾಗೂ ಸೂರ್ಯಕಾಂತ್ ಯಾದವ್ 57 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ದಿನದಂತ್ಯಕ್ಕೆ ಬ್ಯಾಟಿಂಗ್ ಆರಂಭಿಸಿದ್ದ ಗುಜರಾತ್ ವಿಕೆಟ್ ನಷ್ಟವಿಲ್ಲದೇ 2 ರನ್ ಗಳಿಸಿತ್ತು.

ಆರ್ ಪಿ ಸಿಂಗ್ ಮತ್ತು ಬಳಗ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರೂ, ಕೆಲವೊಂದು ಕ್ಯಾಚ್ ಕೈ ಬಿಟ್ಟಿದ್ದು ಕಳಪೆ ಫೀಲ್ಡಿಂಗ್ ಗೆ ಸಾಕ್ಷಿಯಾಯಿತು. ಅದರಲ್ಲೂ ವಿಶೇಷವಾಗಿ ಪೃಥ್ವಿ ಶಾ ಕ್ಯಾಚ್ ಬಿಟ್ಟಿದ್ದರಿಂದ ಮುಂಬೈ ಮೊತ್ತ 228 ರವರೆಗೆ ಬೆಳೆಯಲು ಸಾಧ್ಯವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ