ರಣಜಿ ಟ್ರೋಫಿ: ಕರ್ನಾಟಕ ರಣಜಿ ತಂಡಕ್ಕೆ ಹ್ಯಾಟ್ರಿಕ್ ಗೆಲುವು

ಮಂಗಳವಾರ, 8 ನವೆಂಬರ್ 2016 (08:45 IST)
ವಡೋದರಾ: ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ವಿದರ್ಭ ತಂಡವನ್ನು 189 ರನ್ನುಗಳಿಂದ ಸೋಲಿಸಿದ ಕರ್ನಾಟಕ ರಣಜಿ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ 301 ರನ್ನುಗಳ ಗುರಿ ಪಡೆದಿದ್ದ ವಿದರ್ಭ ಕರ್ನಾಟಕದ ನಾಯಕ ವಿನಯ್ ಕುಮಾರ್ ಮಾರಕ ದಾಳಿಗೆ ಸಿಲುಕಿ 111 ರನ್ನುಗಳಿ್ಗೆ ಆಲೌಟ್ ಆಯಿತು. ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ್ದ ವಿನಯ್ 5 ವಿಕೆಟ್ ಗಳ ಗೊಂಚಲು ಪಡೆದರು.

ಈ ಗೆಲುವಿನೊಂದಿಗೆ ಕರ್ನಾಟಕ ಬಿ ಗುಂಪಿನಲ್ಲಿ ಅಗ್ರ ಸ್ಥಾನಿಯಾಯಿತು. ಈ ಹಿಂದೆ ದೆಹಲಿ ಮತ್ತು ಅಸ್ಸಾಂ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ವಿಶೇಷವೆಂದರೆ ಮೂರನೇ ದಿನವಾದ ಇಂದು ಒಟ್ಟು 17 ವಿಕೆಟ್ ಉರುಳಿತ್ತು. ಬೆಳಗಿನ ಅವಧಿಯಲ್ಲಿ ಕರ್ನಾಟಕ 209 ಕ್ಕೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ ಗಳೇ ಮೇಲುಗೈ ಸಾಧಿಸಿದ್ದು, ಎರಡೂ ತಂಡಗಳು ಎರಡೂ ಇನಿಂಗ್ಸ್ ಗಳಲ್ಲಿ ಸಾಧಾರಣ ಮೊತ್ತ ದಾಖಲಿಸದ್ದವಷ್ಟೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ