ರವಿಚಂದ್ರನ್ ಅಶ್ವಿನ್‌ಗೆ ಗಾಯ: ಏಕ ದಿನ ತಂಡದಲ್ಲಿ ಹರ್ಭಜನ್‌ಗೆ ಅವಕಾಶ

ಸೋಮವಾರ, 12 ಅಕ್ಟೋಬರ್ 2015 (15:26 IST)
ಆಫ್ ಸ್ಪಿನ್ನರ್ ರವಿ ಚಂದ್ರನ್ ಅಶ್ವಿನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರಿಂದಾಗಿ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಅವರನ್ನು ಏಕ ದಿನ ಸರಣಿಯ ಮುಂದಿನ ಪಂದ್ಯಗಳಿಗೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಭಾನುವಾರ ತಿಳಿಸಿದೆ. ಅಶ್ವಿನ್ ತಮ್ಮ ಬೌಲಿಂಗ್‌ನಲ್ಲಿ ಚೆಂಡನ್ನು ತಡೆಯಲು ಯತ್ನಿಸಿದಾಗ ಸೈಡ್ ಸ್ಟ್ರೈನ್ (ಸ್ನಾಯು ಸೆಳೆತ)  ಉಂಟಾಗಿತ್ತು. 

ಕೇವಲ ಒಂದು ಓವರು ಮಾತ್ರ ಬೌಲ್ ಮಾಡಿ ಪೆವಿಲಿಯನ್‌ಗೆ ಹಿಂತಿರುಗಿದ್ದರಿಂದ ಉಳಿದ ಪಂದ್ಯಗಳಿಗೆ ಅವರ ಲಭ್ಯತೆ ಕುರಿತು ಅನುಮಾನ ಮೂಡಿದೆ. ಬಿಸಿಸಿಐ ಅಶ್ವಿನ್ ಅವರು ಪುನಃ ಆಡುವುದನ್ನು ತಳ್ಳಿಹಾಕಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತಂಡಕ್ಕೆ ಸೇರುವಂತೆ ಹರ್ಭಜನ್ ಅವರಿಗೆ ಬುಲಾವ್ ನೀಡಿದೆ.

ಗಾಯದ ವಿಸ್ತ್ರತ ಅಂದಾಜು ಮಾಡಿದ ಬಳಿಕ, ವೈದ್ಯಕೀಯ ತಂಡವು ಅಶ್ವಿನ್ ಗಾಯದಿಂದ ಪೂರ್ಣ ಚೇತರಿಸಿಕೊಳ್ಳಲು ಕಾಲಾವಕಾಶವನ್ನು ವೈದ್ಯಕೀಯ ತಂಡ ದೃಢಪಡಿಸುತ್ತದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ