ದ್ವೀಪ ರಾಷ್ಟ್ರದಿಂದ ಹೊರಹೊಮ್ಮುತ್ತಿರುವ ಹೊಸ ಬ್ಯಾಟ್ಸ್ಮನ್ಗಳು ಗುಣಮಟ್ಟದ ಸ್ಪಿನ್ನರ್ಗಳನ್ನು ನಿಭಾಯಿಸುವ ತಮ್ಮ ಸಾಮರ್ಥ್ಯದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿಲ್ಲ ಎಂದು ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಅಮಿತ್ ಮಿಶ್ರಾ ತಮ್ಮ ಸ್ಪಿನ್ ದಾಳಿಯಿಂದ ಶ್ರೀಲಂಕಾ ತಂಡವನ್ನು ತೊಂದರೆಗೀಡು ಮಾಡಿದ್ದನ್ನು ಕುರಿತು ಅವರು ಹೇಳುತ್ತಿದ್ದರು.
ಪ್ರಸಕ್ತ ಏಷ್ಯನ್ ಬ್ಯಾಟ್ಸ್ಮನ್ಗಳಲ್ಲಿ ತಾಂತ್ರಿಕ ದೋಷವಿದೆಯೇ ಎಂಬ ಪ್ರಶ್ನೆಗೆ , ಶ್ರೀಲಂಕಾದ ಬ್ಯಾಟ್ಸ್ಮನ್ಗಳು ಸ್ಪಿನ್ ಬೌಲಿಂಗ್ ವಿರುದ್ಧ ಹೆಚ್ಚು ತಿಣುಕುತ್ತಿದ್ದಾರೆ. ನಾವು ಸ್ಪಿನ್ ಉತ್ತಮವಾಗಿ ಆಡುತ್ತೇವೆಂದು ಭಾವಿಸಿದ್ದೇವೆ. ಆದರೆ ನಾವು ಸ್ಪಿನ್ ಆಡುವುದರಲ್ಲಿ ಉತ್ತಮವಾಗಿಲ್ಲ. ಏಕೆಂದರೆ ಎರಡೂ ತಂಡಗಳಲ್ಲಿ ಗುಣಮಟ್ಟದ ಸ್ಪಿನ್ನರ್ಗಳಿದ್ದಾರೆ ಎಂದು ಜಯಸೂರ್ಯ ಹೇಳಿದರು.