ಬಿಸಿಸಿಐ ಏನು ಹೇಳುತ್ತೋ ಅದನ್ನೇ ಮಾಡ್ತೀವಿ: ರೋಹಿತ್ ಶರ್ಮಾ

ಶನಿವಾರ, 22 ಅಕ್ಟೋಬರ್ 2022 (11:08 IST)
WD
ಮೆಲ್ಬೋರ್ನ್: 2023 ರ ಏಷ್ಯಾ ಕಪ್ ನಲ್ಲಿ ಭಾಗಿಯಾಗಲು ಭಾರತ ಪಾಕ್ ಪ್ರವಾಸ ಮಾಡುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದ್ದ ಹೇಳಿಕೆ ಪಾಕ್ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಬಗ್ಗೆ ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಲ್ಗೊಂಡಿರುವ ಮಾಧ್ಯಮಗೋಷ್ಠಿಯಲ್ಲಿ ಇದೇ ಪ್ರಶ್ನೆ ಎದುರಾಯ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, ‘ನಾವು ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕು. ಆದರೆ ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳುತ್ತದೆ.  ಬಿಸಿಸಿಐ ಏನು ಹೇಳುತ್ತದೋ ಅದನ್ನು ನಾವು ಮಾಡುತ್ತೇವೆ. ಸದ್ಯಕ್ಕೆ ಈಗಿರುವ ಪಂದ್ಯದ ಬಗ್ಗೆ ಗಮನಹರಿಸೋಣ’ ಎಂದಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ