ಹಿಂದೂಗಳ ಹತ್ಯೆಗೈದ ಬಾಂಗ್ಲಾದೇಶ ಕ್ರಿಕೆಟಿಗನ ಬ್ಯಾಟ್ ಉತ್ಪನ್ನಕ್ಕೆ ಪ್ರಚಾರ: ರೋಹಿತ್ ಶರ್ಮಾ, ಕೊಹ್ಲಿ ಮೇಲೆ ಸಿಟ್ಟು

Krishnaveni K

ಗುರುವಾರ, 3 ಅಕ್ಟೋಬರ್ 2024 (11:57 IST)
ಮುಂಬೈ: ಬಾಂಗ್ಲಾದೇಶ ಕ್ರಿಕೆಟಿಗ ಮೆಹದಿ ಹಸನ್ ಮಿರಾಜ್ ಅವರ ಬ್ಯಾಟ್ ಉತ್ಪನ್ನಗಳನ್ನು ಪ್ರಚಾರ ಮಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮೇಲೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆಯಾಗಿದ್ದಾಗ ಸಾಕಷ್ಟು ಹಿಂದೂಗಳ ಮೇಲೆ ದಾಳಿ, ಹಲ್ಲೆ, ಹತ್ಯೆಗಳು ನಡೆದಿದ್ದವು. ಇದಕ್ಕೆ ಮೊದಲೂ ಅನೇಕ ಬಾರಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಇದನ್ನು ಭಾರತೀಯ ಹಿಂದೂಗಳು ಖಂಡಿಸಿದ್ದರು.

ಆದರೆ ಇದೀಗ ರೋಹಿತ್ ಶರ್ಮಾ ಮತ್ತು ಕೊಹ್ಲಿ ಅದೇ ಬಾಂಗ್ಲಾದೇಶ ಕ್ರಿಕೆಟಿಗನ ಕಂಪನಿಯ ಉತ್ಪನ್ನವೊಂದನ್ನು ಪ್ರಚಾರ ಮಾಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೆಹದಿ ಮಿರಾಜ್ ತಮ್ಮ ಕಂಪನಿಯ ಬ್ಯಾಟ್ ಗಳನ್ನು ಕೊಹ್ಲಿ ಮತ್ತು ರೋಹಿತ್ ಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ಉಡುಗೊರೆ ಸ್ವೀಕರಿಸಿದ ಕೊಹ್ಲಿ ಮತ್ತು ರೋಹಿತ್ ವಿಡಿಯೋದಲ್ಲಿ ಮಿರಾಜ್ ಬ್ಯಾಟ್ ನ್ನು ಹೊಗಳಿದ್ದಾರೆ. ಅಲ್ಲದೆ, ಇದನ್ನು ಪ್ರಚುರಪಡಿಸಿದ್ದಾರೆ. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂಗಳನ್ನು ಕೊಂದ ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬನ ಬ್ಯಾಟ್ ಉತ್ಪನ್ನವನ್ನು ನೀವು ಪ್ರಚಾರ ಮಾಡುತ್ತಿದ್ದೀರಾ? ಒಂದೆಡೆ ಬಾಂಗ್ಲಾ ನಮ್ಮ ದೇಶದ ವಿರುದ್ಧವೇ ಪಿತೂರಿ ಮಾಡುತ್ತಿದ್ದರೆ ಆ ದೇಶದ ಕ್ರಿಕೆಟಿಗನ ಕಂಪನಿ ಉತ್ಪನ್ನ ಬೆಳೆಯಲು ನೀವೇ ಪ್ರೋತ್ಸಾಹಿಸುತ್ತಿದ್ದೀರಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ತರಗತಿಗಳ ಮೂಲಕ ಕಲಿಕೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಟೀಚ್ ಮಿಂಟ್ನೊಂದಿಗೆ ಕೈಜೋಡಿಸಿದ ಮರ್ಕ್ ಲೈಫ್ ಸೈನ್ಸ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ