ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡದ ಹೈ ಪರ್ಫಾರ್ಮೆನ್ಸ್ ಮ್ಯಾನೇಜರ್ ಹುದ್ದೆಗೆ ಹೆಸರಿಸುವ ನಿರೀಕ್ಷೆಯಿದೆ. ಆದರೆ ಅವರ ನೇಮಕ ಸುದೀರ್ಘಾವಧಿಗೆ ಇರುವುದಿಲ್ಲವೆಂದು ನಿರೀಕ್ಷಿಸಲಾಗಿದೆ. ಅದಕ್ಕೆ ಕಾರಣ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಕೂಡ ಕೆಲಸ ನಿರ್ವಹಿಸುತ್ತಿರುವುದು. ಟೀಂ ಇಂಡಿಯಾವನ್ನು ಸುದೀರ್ಘ ಕಾಲ ಜತೆಗೂಡುವುದರಿಂದ ರಾಜ್ಯ ಸಂಸ್ಥೆಯಲ್ಲಿ ಅವರ ಕೆಲಸಕ್ಕೆ ಅಡ್ಡಿಯಾಗಬಹುದೆಂದು ಭಾವಿಸಲಾಗಿದೆ.
ಗಂಗೂಲಿ ಅವರ ಸಮೃದ್ಧ ಅನುಭವ ಟೀಮ್ ಇಂಡಿಯಾಗೆ ಮಾರ್ಗದರ್ಶನ ಮಾಡಲು ಸೂಕ್ತ ಅಭ್ಯರ್ಥಿಯನ್ನಾಗಿಸಿದೆ. ಠಾಕುರ್ ಕೂಡ ಅವರ ಪ್ರಯತ್ನಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಭಾರತದ ಕ್ರಿಕೆಟ್ಗೆ ಸೌರವ್ ಉತ್ತಮ ಕೊಡುಗೆ ನೀಡಿದ್ದಾರೆ. ನಾವು ಏನೇ ನಿರ್ಧರಿಸಿದರೂ ಭಾರತೀಯ ಕ್ರಿಕೆಟ್ನ ಉತ್ತಮ ಹಿಸಾಸಕ್ತಿಯನ್ನು ಒಳಗೊಂಡಿರುತ್ತದೆ. ಆ ಬಗ್ಗೆ ನಿರ್ಧರಿಸಲು ನಮಗೆ ಕಾಲಾವಕಾಶ ನೀಡಿ ಎಂದು ಅವರು ಹೇಳಿದರು.