ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಆಡಲು ಸುನಿಲ್ ನಾರಾಯಣ್‌ಗೆ ಹಸಿರು ನಿಶಾನೆ

ಬುಧವಾರ, 1 ಏಪ್ರಿಲ್ 2015 (12:19 IST)
ಕೊಲ್ಕತ್ತಾ ನೈಟ್ ರೈಡರ್ಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಐಪಿಎಲ್ ಈ ಆವೃತ್ತಿಯಲ್ಲಿ ಆಡಲು ಹಸಿರು ನಿಶಾನೆ ನೀಡಿದೆ.ಕೊಲ್ಕತ್ತಾ  ನೈಟ್ ರೈಡರ್ಸ್ ತಂಡಕ್ಕೆ ಸಂತಸದ ಸುದ್ದಿ ಏನೆಂದರೆ ನಿಗೂಢ ಸ್ಪಿನ್ನರ್ ಸುನಿಲ್ ನಾರಾಯಣ್ ಬಿಸಿಸಿಐನ ಬೌಲಿಂಗ್  ಶೈಲಿಯ ಟೆಸ್ಟ್‌ನಲ್ಲಿ ತೇರ್ಗಡೆಯಾಗಿದ್ದಾರೆ.

ಇದರಿಂದಾಗಿ ಐಪಿಎಲ್ 2015ರ ಸರಣಿಯಲ್ಲಿ ಭಾಗವಹಿಸಲು ಅವರಿಗೆ ಲೈನ್ ಕ್ಲಿಯರ್  ಆಗಿದೆ. ನಮ್ಮ ಮುಖ್ಯ ಸ್ಪಿನ್ನರ್ ನಾರಾಯಣ್ ಅವರನ್ನು ಆಡಿಸದಿದ್ದರೆ ಐಪಿಎಲ್‌ಗೆ ನಮ್ಮ ತಂಡವನ್ನು ಆಡಿಸುವುದಿಲ್ಲ ಎಂದು ಕೆಕೆಆರ್ ಬೆದರಿಕೆ ಹಾಕಿತ್ತು.

ಬಿಸಿಸಿಐನ ಬೌಲಿಂಗ್ ಪುನರ್ಪರಿಶೀಲನೆ ಸಮಿತಿಯ ವೆಂಕಟರಾಘವನ್, ಜಾವಗಲ್ ಶ್ರೀನಾಥ್ ಮತ್ತು ಜಯಪ್ರಕಾಶ್  ಸುನಿಲ್ ನಾರಾಯಣ್ ಅವರ ನವೀಕೃತ ಬೌಲಿಂಗ್ ಶೈಲಿಯನ್ನು ಗಮನಿಸಿ ಐಸಿಸಿ ಅನುಮೋದನೆಯ ಮಿತಿಯಲ್ಲಿದೆಯೆಂದು ತೀರ್ಮಾನಿಸಿ  ಐಪಿಎ‌ಲ್‌ನಲ್ಲಿ ಆಡಲು ಅನುಮತಿ ನೀಡಿದೆ.

ವೆಬ್ದುನಿಯಾವನ್ನು ಓದಿ