ಸಚಿನ್ ತೆಂಡೂಲ್ಕರ್ ನನಗೆ ಆದರ್ಶಪ್ರಾಯರಾಗಿದ್ದು, ಸಚಿನ್ ದೈನ್ಯತೆ ಮತ್ತು ಆಟದಲ್ಲಿ ಅವರ ಉತ್ಸಾಹ ತಮಗೆ ಮತ್ತು ಇತರರಿಗೆ ಸ್ಫೂರ್ತಿ ಎಂದು ಏಕದಿನ ನಾಯಕ ಧೋನಿ ಹೇಳಿದ್ದಾರೆ. ನಾವು ಬೆಳೆಯುತ್ತಿದ್ದಾಗ ಸಚಿನ್ ಆಟವನ್ನು ವೀಕ್ಷಿಸುತ್ತಿದ್ದೆವು. ಅವರು ನಮಗೆ ದೇವರ ರೀತಿ. ಅವರ ಸುತ್ತ ಅಂತಹ ಪ್ರಭೆ ಆವರಿಸಿದೆ ಎಂದು ಧೋನಿ ಹೇಳಿದರು.
ಯಶಸ್ಸನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಧೋನಿಯನ್ನು ಕೇಳಿದಾಗ, ಪ್ರಾಯೋಗಿಕ ಮತ್ತು ಪ್ರಾಮಾಣಿಕರಾಗಿ ಜೀವನದಲ್ಲಿ ಇರುವುದು ಮುಖ್ಯ ಎಂದು ಧೋನಿ ಹೇಳಿದರು. ಮನುಷ್ಯನ ದುರಾಸೆಯನ್ನು ನಿಯಂತ್ರಿಸುವುದು ಅತ್ಯಂತ ಕಷ್ಟದ ಕೆಲಸ. ದುರಾಸೆಗೆ ಮೇಲಿನ ಮಿತಿ ಇರುವುದೇ ಇಲ್ಲ ಎಂದು ಧೋನಿ ಹೇಳಿದರು.