ಇತ್ತೀಚಿನ ಗಮನಾರ್ಹ ನಿರ್ಧಾರಗಳೊಂದರಲ್ಲಿ ಹಾಕಿ ಇಂಡಿಯಾ ಹಿರಿಯ ಗೋಲ್ಕೀಪರ್ ಪಿಆರ್ ಶ್ರೀಜೇಶ್ ಅವರನ್ನು ರಿಯೊ ಒಲಿಂಪಿಕ್ಸ್ಗೆ ತೆರಳುವ ರಾಷ್ಟ್ರೀಯ ತಂಡದ ನಾಯಕರಾಗಿ ಹೆಸರಿಸಿದ್ದು, ಸುದೀರ್ಘ ಕಾಲ ನಾಯಕರಾಗಿದ್ದ ಸರ್ದಾರ್ ಸಿಂಗ್ ಅವರಿಗೆ ನಾಯಕತ್ವದಿಂದ ಕೊಕ್ ನೀಡಲಾಗಿದೆ.
ತಂಡದ ಮುಖ್ಯಭಾಗವಾದ ಎಸ್.ವಿ. ಸುನಿಲ್ ಅವರನ್ನು ಉಪನಾಯಕರಾಗಿ ನೇಮಿಸಲಾಗಿದೆ. ಸರ್ದಾರ್ ಸಿಂಗ್ ಅವರು ಮೈದಾನದಲ್ಲಿ ಮತ್ತು ಹೊರಗೆ ಸಂಕಷ್ಟದ ಸ್ಥಿತಿಗೆ ಸಿಕ್ಕಿದ್ದರು. ಮೈದಾನದಲ್ಲಿ ಮೊನಚಿನ ಮಿಡ್ಫೀಲ್ಡರ್ ಆಗಿದ್ದ ಅವರ ಆಟ ಇತ್ತೀಚೆಗೆ ಕ್ಷೀಣಿಸಿತ್ತು. ಇದಲ್ಲದೇ ಬ್ರಿಟಿಷ್ ಯುವತಿಗೆ ಮದುವೆಯ ಭರವಸೆ ನೀಡಿದ ಬಳಿಕ ಕೇಳಿಬಂದ ರೇಪ್ ಆರೋಪಗಳು ಅವರ ಖ್ಯಾತಿಯನ್ನು ಕುಂದಿಸಿತ್ತು.
ತಂಡ:
ಗೋಲ್ ಕೀಪರ್: ಪಿಆರ್ ಶ್ರೀಜೇಶ್ (ನಾಯಕ)
ಡಿಫೆಂಡರ್ಗಳು: ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಕೊತಾಜಿತ್ ಸಿಂಗ್ ಸುರೇಂದರ್ ಕುಮಾರ್ ವಿಆರ್ ರಘುನಾಥ್
ಮಿಡ್ ಫೀಲ್ಡರ್ಸ್: ಸರ್ದಾರ್ ಸಿಂಗ್, ದೇವಿಂದರ್ ವಾಲ್ಮೀಕಿ, ಡ್ಯಾನಿಶ್ ಮುಜ್ತಾಬಾ, ಚಿಂಗಲಸೇನ ಸಿಂಗ್, ಮನ್ಪ್ರೀತ್ ಸಿಂಗ್, ಎಸ್ಕೆ ಉತ್ತಪ್ಪ