ಗೆಲುವಿನ ಕ್ರೆಡಿಟ್ ಆಟಗಾರರಿಗೆ ಸಲ್ಲುತ್ತದೆ. ಇಂದು ತಂಡದ ಪ್ರಯತ್ನವಾಗಿದ್ದು, ಉತ್ತಮ ಜೊತೆಯಾಟ ಮೂಡಿಬಂದಿದೆ. ಶೆಹಜಾದ್, ಹಫೀಜ್, ಮಲಿಕ್ ಮತ್ತು ಉಮರ್ ಅಕ್ಮಲ್ ಎಲ್ಲರೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಬೌಲರ್ಗಳು ಕೂಡ ಚೆನ್ನಾಗಿ ಬೌಲ್ ಮಾಡಿದರು ಎಂದು ಅಫ್ರಿದಿ ಪಂದ್ಯದ ನಂತರ ಹೇಳಿದ್ದಾರೆ.
ಶ್ರೀಲಂಕಾ ತಂಡದಲ್ಲಿ ನಾಲ್ವರು ಹೊಸಬರಿದ್ದು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ, ಆದರೆ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗಲಿಲ್ಲ ಎಂದು ಶ್ರೀಲಂಕಾ ನಾಯಕ ಮಾಲಿಂಗಾ ಹೇಳಿದ್ದಾರೆ. ಅವರ ಬೌಲಿಂಗ್ ಫಾರಂ ಕೂಡ ಕಳವಳಕಾರಿಯಾಗಿದ್ದು, ಎರಡನೇ ಪಂದ್ಯದಲ್ಲಿ ಟೀಂ ಪುಟಿದೇಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.