ಎಲ್ಲಾ ದೇವರೇ ನೋಡಿಕೊಳ್ತಾನೆ: ತಂಡದಿಂದ ಕೈ ಬಿಟ್ಟ ಬಳಿಕ ಶಿಖರ್ ಧವನ್ ಹೇಳಿಕೆ

ಗುರುವಾರ, 29 ಡಿಸೆಂಬರ್ 2022 (09:20 IST)
Photo Courtesy: Twitter
ನವದೆಹಲಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಡ್ರಾಪ್ ಆದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಪರೋಕ್ಷವಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ತಂಡದ ಹಿರಿಯ ಆರಂಭಿಕ ಶಿಖರ್ ಧವನ್ ಗೆ ಹಲವು ಅವಕಾಶ ನೀಡಿದ್ದರೂ ಇತ್ತೀಚೆಗಿನ ದಿನಗಳಲ್ಲಿ ರನ್ ಗಳಿಸಿರಲಿಲ್ಲ. ಹೀಗಾಗಿ ಅವರನ್ನು ಈ ಸರಣಿಗೆ ಕೈ ಬಿಡಲಾಗಿದೆ.

ಇದರ ಬೆನ್ನಲ್ಲೇ ಧವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಪ್ರಕಟಿಸಿ, ಶ್ರಮಪಡುವುದು ನಮ್ಮ ಕರ್ತವ್ಯ. ಉಳಿದಿದ್ದನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ